ಶುಕ್ರವಾರ, ನವೆಂಬರ್ 16, 2018

ತಳಂಗ್ ನೀರ್(ಕೊಡವ ಸಿನೆಮಾ)

ಪ್ರಾದೇಶಿಕ ಭಾಷೆಯ ಚಿತ್ರವಾದ ಇದು ಕೊಡಗಿನ ಪರಿಸರ ಮತ್ತು ಕೊಡವ ಸಂಸ್ಕೃತಿಯನ್ನು, ಆಹಾರವನ್ನು ಹಾಸು ಹೊಕ್ಕಾಗಿ ತೋರಿಸಲಾಗಿದೆ. ಕೊಡವರ ದೇಶ ಸೇವೆ ಹಾಗೂ ದೈರ್ಯ ಸ್ಥೇರ್ಯವನ್ನು ಕೇಂದ್ರಕರಿಸಲಾಗಿದೆ.ನೈಜತೆಯ ಜೋತೆಗೆ ಅವರ ಪರಾಕ್ರಮವನ್ನು ಈ ಚಿತ್ರವನ್ನು ತೋರಿಲಾಗಿದೆ.ತಂದೆತಾಯಿರ ಬಗೆಗಿನ ಮಮತೆ ಯನ್ನು ಮನಮುಟ್ಟುವಂತೆ ಚಿತ್ರಿಸಿದ್ದಾರೆ. ಕುಲಿಯಾಳಿನ  ಸಮಸ್ಯೆ ಬರಿಯ ಕೊಡಗಿದ್ದು ಅಲ್ಲ ಅದು ಕರ್ನಾಟಕದ ಸಮಸ್ಯೆ ಎಂಬುದನ್ನು ಪರೋಕ್ಷವಾಗಿ ಹೇಳಲಾಗಿದೆ.ಕರಾಳ ಸಮಸ್ಯೆಯಾದ ಕ್ಯಾನ್ಸರ್ ಎಂಬ ಮಹಾಮಾರಿಯ ಬಗೆಗೆ ಎಚ್ಚರಿಕೆ ಸಂದೇಶ ವನ್ನು ನೀಡಲಾಗಿದೆ.ಇತ್ತೀಚಗೆ ಕೊಡಗಿನಲ್ಲಿ ನಡೆದ ದುರಂತಕ್ಕೆ ಕಾರಣವಾದ ಸಮಸ್ಯೆಗಳ ಬಗ್ಗೆ ವಿವರಿಸಲಾಗಿದೆ. ಕರ್ನಾಟಕದ ಶಾಲೆಗಳ ದುರಂತ
ಮತ್ತು ಇಂದಿನ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಹೇಳಲಾಗಿದೆ.
ಕೊಡಗಿನ ಇಂದಿನ ಸಮಸ್ಯೆ ಹಾಗೂ ಕೊಡುಗು ತನ್ನ ಅಸ್ಥಿತ್ವವನ್ನು ಕಳೆದುಕೊಂಡಿದೆ ಎಂಬುದನ್ನು ಸಾರಿ ಹೇಳಿದಂತೆ ಇದೆ. ಕಾಲಾಂತರದ ತುಲನೆ ಹಾಗೂ ಬದುಕು ಇವುಗಳನ್ನು ಪರಸ್ಪರ ಎದುರು ಬದುರಾಗಿ ಮೆಳೈಸಲಾಗಿದೆ.  ಸಾವಿನ ಬಗ್ಗೆ ಪ್ರಶ್ನೆಯನ್ನು ಚಿಕ್ಕ ಮಗು ಎತ್ತ್ತುತೆ ಸಾವಿನ ಬಗೆಗೆ ಆಕೆಯ ಪ್ರಶ್ನೆ ಮಾನವೀಯ ಮೌಲ್ಯಗಳನ್ನು ಎತ್ತಿ ತೋರಿಸುತ್ತದೆ. ಮನುಷ್ಯನ ಬದುಕಿನ ವಾಸ್ತವಿಕವಾಗಿ ತೆರೆದು ತೋರಿಸಲಾಗಿದೆ. ಇಂದಿನ ಮನುಷ್ಯನ ಭಾವನೆ ಬಾವಚಿತ್ರವನ್ನು ನೀರಲ್ಲಿ ಬಿಟ್ಟ ಹಾಗೆ. ಕೊಡಿಗಿನ ಎಲ್ಲಾ ಬದಲಾವಣೆಗೆ ನಾವೆ ಕಾರಣ ಎಂಬುದನ್ನು ಸಾರಿ ಹೇಳುತಿತ್ತು. ಬದಲಾವಣೆ ನಮ್ಮ ಚರಿತ್ರೆಯನ್ನು ನಾವು ಮರೆತಿದ್ದೇವೆ  ಜೋತೆಗೆ ಅದನ್ನು ಮತ್ತೆ ಮರು ನಿರ್ಮಾಣ ಮಾಡಬೇಕು ಎನ್ನುವ ಸಂದೇಶವನ್ನು ನೀಡುತ್ತದೆ. ಪ್ರಕೃತಿಯ ಜೋತೆಗೆ ಸಂವಾದ ಮನುಷ್ಯ ನಡೆಸುತ್ತಿಲ್ಲ. ಅದರ ಬದಲಾಗಿ ಇಂದು ಮಾಫಿಯಗಳು ಇವೆ .
ಮನುಷ್ಯ ಮತ್ತು ಪ್ರಾಣಿಗಳ ನಡುವಿನ ಸಂಘರ್ಷವನ್ನು ಹೇಳಲಾಗಿದೆ. ಬದುಕು ಯಾವುದು ಸುಂದರ ?. ಎನ್ನುವ ಪ್ರಶ್ನೆಯನ್ನು ಎತ್ತುತ್ತಾ  ಕಾಲದ ಮೇಲೆ ತೂಕವನ್ನು ಹೇರಲಾಗಿದೆ. ಕಳ್ಳ ಎಂದರೆ ಯಾರು. ಎನ್ನುವ ಪ್ರಶ್ನೆ ಬಹಳ ಮುಖ್ಯವಾದ್ದು. ಹಣ ಇತ್ತು ಆದರೆ ಒಳ್ಳೆಯ ಹೃದಯ ಇರಲಿಲ್ಲ.ನಮ್ಮ ಮಣ್ಣು ನಮ್ಮ ನಾಡು ಎನ್ನುವ ಪರಿಕಲ್ಪನೆ ನಮ್ಮಲ್ಲಿ ಇರಬೇಕು.  ಕೊಡವರ ಸಂಸ್ಕೃತಿ ಮತ್ತು ಆಚಾರ ಚಿಚಾರ, ಸಂಪ್ರದಾಯ- ಆಚರಣೆ ,ಹಬ್ಬ ಗಳ ಬಗ್ಗೆ ಕೊಡವರ ಚಿತ್ರಣದ ಕುರಿತು ಸೂಕ್ಷ್ಮ ಎಚ್ಚರಿಕೆಯನ್ನು ನೀಡಲಾಗಿದೆ.


ಕಾಮೆಂಟ್‌ಗಳಿಲ್ಲ: