ಶನಿವಾರ, ನವೆಂಬರ್ 17, 2018

ಪಡ್ಡಾಯಿ (ತುಳು ಸಿನೆಮಾ)

ಪ್ರಾದೇಶಿಕ ಭಾಷೆಯ ಚಿತ್ರ ಪಡ್ಡಾಯಿ.ಮೂಲ ಷೇಕ್ಸಪೀಯರ್ ನಾಟಕದ ಮ್ಯಾಕ್ಸಬೇತ್ ನಾಟಕದ ಅವತರಣಿಕೆ.  ದೈವ ಎಂದರೆ ಮನಸ್ಸು. ಏಳುಬೀಳಿನ ಜೋತೆಗೆ ಬದುಕಿನ ಅವಸ್ಥೆಯನ್ನು ಹೇಳಲಾಗುತ್ತದೆ.
ತುಳುನಾಡಿನ ಮೋಗವೀರ ಸಮುದಾಯದ ಕಥನವನ್ನು ಇದರಲ್ಲಿ ತೋರಿಸಲಾಗಿದೆ.ಕಡಲ ಮೇಲೆ ಇದ್ದ ನಿಯಂತ್ರಣ ಹಾಗೂ ಅದರ ಜೋತೆಗಿನ ಒಡನಾಟ ವನ್ನು ಚೆನ್ನಾಗಿ ತೋರಿಸಲಾಗಿದೆ.  ತುಳುನಾಡಿನ ಆರಾಧನಾ ಪರಂಪರೆಯನ್ನು ವಿಶೇಷವಾಗಿ ತೋರಿಸುವ ಮೂಲಕ ಚಿತ್ರಕ್ಕೆ ಹೊಸಮೆರುಗನ್ನು ನೀಡಲಾಗಿದೆ. ಮೋಗವೀರ ಸಮುದಾಯದ ಬದುಕು, ಜೀವನಕ್ಕೆ ಹೀಡಿದ ಕನ್ನಡಿ.  ಭೂಮಾಲಿಕ ವ್ಯವಸ್ಥೆ ಯಿಂದ ಬಿಡುಗಡೆ ಯ ಜೋತೆಗೆ ಹೊಸ ಬದುಕನ್ನು ಕಟ್ಟಿಕೊಂಡ ಮೋಗವೀರ ಸಮುದಾಯದ ಚಿತ್ರಣ ಇದಾಗಿದೆ.
ಸಂಪ್ರದಾಯಿಕ, ಯಾಂತ್ರಿಕ ಮೀನುಗಾರಿಕೆ ಯ ಕುರಿತ ಪ್ರಶ್ನೆ ಎತ್ತುತ್ತಾ ಸಮುದ್ರದಲ್ಲಿ ನಡೆಯುವ ಜಗಳ, ಗಲಾಟೆ ಇತ್ಯಾದಿಗಳನ್ನು ಸೂಕ್ಷ್ಮವಾಗಿ ಹೇಳಲಾಗಿದೆ.  ಹಳೆ ಹೊಸದು( ತಲೆಮಾರು) ಇವುಗಳ ಸಂಘರ್ಷ ವನ್ನು ತೋರಿಸಲಾಗಿದೆ. ಮೋಗವೀರರ ಬದುಕಿನ ಡೋಲಾಯಾಮಾನವಾಗಿರುವ ಸ್ಥಿತಿಯನ್ನು ಪರೋಕ್ಷವಾಗಿ ಹೇಳಲಾಗುತ್ತದೆ. ಗುಳಿಗ ಮತ್ತು ಹುಲಿ ಎರಡು ಚಿತ್ರಣದ ಮೂಲಕ ಪ್ರತಿಮೆಯನ್ನು ನೀಡಲಾಗಿದೆ. ಉಂಡ ಮನೆಗೆ ಗುಂಡು ಹಾಕುವ ಮೂಲಕ  ಆತಿ ಆಸೆ ಗತಿ ಗೇಡು ಹಾಗೂ ಹಾಸಿಗೆ ಇದಷ್ಟು ಕಾಲು ಚಾಚು ಎನ್ನುವ ಮಾತನ್ನು ಮಾರ್ದನಿಸಿದಂತೆ ಭಾಸವಾಗುತ್ತದೆ.     ಆಸೆ ಮಿತಿ ಎಂಬುದು ಇಲ್ಲ.  ಹದ್ದು ಕಬಳಿಸುವಿದಕ್ಕೆ ಹೊಂಚು ಹಾಕುತ್ತಿರುವ ಮೂಲಕ ಮನುಷ್ಯನ ಬದುಕಿಗೆ ತುಲನೆ ಮಾಡಲಾಗಿದೆ.
ದೊಡ್ಡವನಾಗಬೇಕು ಎಂಬ ಬಯಕೆ ಆಸೆ ಮನುಷ್ಯ ಸಹಜ ಗುಣ.ಅದಕ್ಕೆ ಮನುಷ್ಯ ತನ್ನ ತನ್ನನ್ನು ತಾನು ನಿಯಂತ್ರಣದಲ್ಲಿ ಇಡಬೇಕು ಎನ್ನುವ ಸಂದೇಶದ ಜೊತೆಗೆ ಬದಲಾದ ಬದುಕಿನ  ಚಿತ್ರಣದ ಜೋತೆಗೆ  ಮನಸ್ಸು ದೇಹದ ನಡುವಿನ ಅಂತರವನ್ನು ಹೇಳುತ್ತಾ ಬದುಕಿನ ಬಿರುಗಾಳಿಯ ಮದ್ಯೆ ನೆಮ್ಮದಿ ಯನ್ನು ಕಳೆದೊಂಡಿದೆ.  ಮಿಂಚಿನ ಓಟಕ್ಕೆ ಬಲಿ ಬಿದ್ದರೆ ಇದೆ ಸಮಸ್ಯೆಯಾಗುವುದು. ಹೊಸ ವಸ್ತುಗಳ ಕೊಳ್ಳುವ ವ್ಯಾಮೋಹ ಮನುಷ್ಯನನ್ನು ಅದಪತನಕ್ಕೆ ಕಾರಣ. ಚೋಮದುಡಿಯ ಸಂಘರ್ಷವನ್ನು ಸ್ವಲ್ಪ ತುಲನೆ ಮಾಡಬಹುದು.  ಜೋತೆಗೆ ತಪ್ಪಿಗೆ ಸರಿಯಾದ ಶಿಕ್ಷೆ ಖಂಡಿತ ಸಿಗುತ್ತದೆ ಎನ್ನುವ ಸಂದೇಶವನ್ನು ನೀಡಲಾಗಿದೆ.


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ